ಬಳ್ಳಾರಿ, ಆ.04, ಬೆಂಗಳೂರಿನ ಪೌರರಕ್ಷಣಾ ದಳದ ನಿರ್ದೇಶಕರು, ಗೃಹರಕ್ಷಕದಳದ ಮಹಾ ಸಮಾದೇಷ್ಟರು ಹಾಗೂ ಪೊಲೀಸ್ ಮಹಾ ನಿರ್ದೇಶಕರಾದ ಎ.ಎಂ.ಪ್ರಸಾದ್ ಅವರು ಸೋಮವಾರ ಜಿಲ್ಲಾ ಗೃಹರಕ್ಷಕ ದಳ ಕಚೇರಿಗೆ ಭೇಟಿ ನೀಡಿ ಪೌರಕ್ಷಣಾ (ಸಿವಿಲ್ ಡೆಫೆನ್ಸಿ) ಘಟಕಕ್ಕೆ ಚಾಲನೆ ನೀಡಿದರು.
ಚಾಲನೆ ನೀಡಿದದ ಅವರು ಅಲ್ಲಿನ ಸ್ವಯಂ ಸೇವಕರು, ಅಧಿಕಾರಿಗಳ ಜೊತೆಗೆ ಸಂವಾದ ನಡೆಸಿದರು. ನಂತರ ಪೌರಕ್ಷಕರಣಾ ಸದಸ್ಯರು ಮಾಡುವ ಸ್ವಯಂ ಸೇವಕರ ಜೊತೆ ಮಾತನಾಡಿದರು.

ಕಾರ್ಯಕ್ರಮದ ನಂತರ ಅವರು ಮೀನಳ್ಳಿಯಲ್ಲಿರುವ ಗೃಹರಕ್ಷಕರ ಪ್ರಾದೇಶಿಕ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ತರಬೇತಿ ಕೇಂದ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತು ಅಲ್ಲಿ ನಡೆಸುವ ತರಬೇತಿಗಳ ಬಗ್ಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಗೃಹರಕ್ಷಕ ದಳ ಮತ್ತು ಜಿಲ್ಲಾ ಸಮಾದೇಷ್ಟ ಎಂ.ಎ.ಷಕೀಬ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ತಿಮ್ಮಾರೆಡ್ಡಿ, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಎಂ.ರವಿ ಪ್ರಸಾದ್, ಉಪ ಸಮಾದೇಷ್ಟರಾದ ಬಿ.ಎಸ್.ಕಾಂಬಳೆ, ಹೆಚ್.ತಿಪ್ಪೇಸ್ವಾಮಿ ¨Àಕರೋದು, ಕಂ.ಕಮಾAಡರ್ ಜಿ.ಬಸವರಾಜು, ಸುರೇಶ್, ಬಿ.ಕೆ.ಬಸವಲಿಂಗ ಹಾಗೂ ಪ್ರಥಮ ದರ್ಜೆ ಸಹಾಯಕರಾದ ಬಿ.ಎನ್.ಗೋಪಿನಾಥ ಸೇರಿದಂತೆ ಕಚೇರಿ ಸಿಬ್ಬಂದಿಗಳು ಮತ್ತು ಗೃಹರಕ್ಷಕದಳ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

