May 01, www.truemediakannada.in ಹರಿಹರ, ಬೆಳ್ಳಂಬೆಳಿಗ್ಗೆನೆ ಹರಿಹರ ನಗರಕ್ಕೆ ಶಾಕ್ ಕೊಟ್ಟ ತಹಶಿಲ್ದಾರರಾದ ಕೆ.ಬಿ.ರಾಮಚಂದ್ರಪ್ಪನವರು.
ಸರ್ಕಾರದ ಆದೇಶವನ್ನು ದಿಕ್ಕರಿಸಿ ವ್ಯಾಪಾರ ವಹಿವಾಟು ಮಾಡಿದರೇ ಅಂತಹ ಅಂಗಡಿಗಳನ್ನು ಸೀಜ್ ಮಾಡುತ್ತೇವೆಂದು ಖಡಕ್ ಎಚ್ಚರಿಕೆ ನೀಡಿದರು, ಬೆಳಿಗ್ಗೆ ಏಳು ಗಂಟೆಯಿಂದಲೆ ಕಾರ್ಯಪ್ರವೃತ್ತರಾದ ತಾಲ್ಲೂಕು ಆಡಳಿತ, ನಗರಸಭೆ, ಪೋಲಿಸ್ ಇಲಾಖೆಯ ಸಿಬ್ಬಂದಿ. ಅನಗತ್ಯವಾಗಿ ಓಡಾಡುತ್ತಿರುವವರಿಗೆ ಹಾಗೂ ಅನಾವಶ್ಯಕವಾಗಿ ತೆರೆದಿದ್ದ ಅಂಗಡಿ ಮುಂಗಟ್ಟುಗಳಿಗೆ ದಂಡದ ರೂಪದಲ್ಲಿ ಬುದ್ದಿ ಹೇಳಿದ ಪೌರಾಯುಕ್ತೆ ಲಕ್ಷ್ಮೀ, ಹಣ್ಣು, ತರಕಾರಿಗಳನ್ನು ಮಾರಾಟ ಮಾಡಲು ಒಂದು ಸ್ಥಳ ನಿಗದಿ ಮಾಡಲಾಗಿದೆ,ಆ ಸ್ಥಳದಲ್ಲಿಯೇ ಮಾರಾಟ ಮಾಡಿ ಇಲ್ಲವಾದಲ್ಲಿ ದಂಡ ಹಾಕಲಾಗುವುದು ಎಂದು ಆರೋಗ್ಯ ನಿರೀಕ್ಷಕ ಸಂತೋಷ್ ನಾಯ್ಕ್ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆಯ ಸಿಬ್ಬಂದಿ ಕೂಡ ಹೆಚ್ಚಿನ ಶ್ರಮವಹಿಸಿ ಜನದಟ್ಟಣೆಯನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾದರು…
